ಶಾಂತಿ ಶಾಂತಿ ಶಾಂತಿ
ಶಾಂತಿ ಮಂತ್ರ ಊದಿದ
ಬಾಯಿಗಳಲ್ಲಿಂದು ರಣಕಹಳೆ
ಬೇಲಿಯೇ ಎದ್ದು ಹೊಲ ಮೇಯ್ದಂತೆ
ಗುಬ್ಬಿಯ ಮುಂದೆ ಬ್ರಹ್ಮಾಸ್ತ್ರ
ಸರ್ವಾಧಿಕಾರದ ಪರಮಾವಧಿ
ರಕ್ಷಕರೇ ಭಕ್ಷಕರಾಗಿ
ನುಡಿಸಿದರು ಭೀಭತ್ಸಗಾನ
ದೇವರಿಗೂ ಸಡ್ಡು ಹೊಡೆದು
ಮಾಡಿದರು ಮಾರಣ ಹೋಮ
ಕ್ಷಣಕ್ಕೊಂದು ಅವಿಷ್ಕಾರ
ಸಾವನ್ನೇ ಗೆಲ್ಲುವೆನೆಂಬ ಅಹಂಕಾರ
ಗನ್ನು ಬಾಂಬು ಅಣ್ವಸ್ತ್ರಗಳ ಆಕ್ರೋಶ
ಸುಡು ಸುಡುವ ಭಾವ
ಕೆಂಡ ಕಾರುವ ವಲಯ
ಬುಗಿಲೆದ್ದು ಮುಗಿಲೆತ್ತರ
ವಿಶ್ವವನ್ನೇ ನಡುಗಿಸುವ
ರಕ್ತದೋಕುಳಿಯ ಪ್ರವಾಹ
ಹೆಪ್ಪುಗಟ್ಟಿಸುವ ಆರ್ತನಾದ
ಹೃದಯ ಹಿಂಡುವ ನೋವಿನ ಬಲೆ
ಅಮಾಯಕ ಜನರಿಗೆಲ್ಲಿದೆ ನೆಲೆ
ಬತ್ತಿ ಹೋಗಿದೆ
ಮಾನವೀಯತೆಯ ಸೆಲೆ.
*****
Related Post
ಸಣ್ಣ ಕತೆ
-
ಒಂಟಿ ತೆಪ್ಪ
ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…
-
ಒಲವೆ ನಮ್ಮ ಬದುಕು
"The best of you is he who behaves best towards the members of his family" (The Holy Prophet) ವಾರದ ಸಂತೆ.… Read more…
-
ನಂಟಿನ ಕೊನೆಯ ಬಲ್ಲವರಾರು?
ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…
-
ಕಳ್ಳನ ಹೃದಯಸ್ಪಂದನ
ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…
-
ಇರುವುದೆಲ್ಲವ ಬಿಟ್ಟು
ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…